Thursday, May 21, 2026

ನೀರು....

 ##ತರಲೆ##ಬೇಸಿಗೆಯಲ್ಲಿ ಬೇಕು ಅಂದ್ರೂ ನಳ್ಳಿಯಲ್ಲಿ ನೀರು ಬರೋದಿಲ್ಲ, ಮಳೆಗಾಲದಲ್ಲಿ ಚರಂಡಿ ನೀರು ಬೇಡ ಅಂದ್ರು ಎಲ್ಲಾ ರೂಮುಗಳ ಒಳಗೂ ಬರುತ್ತೆ, ಇನ್ನು ಚಳಿಗಾಲ ಬಂದ್ರೆ ಕೋಲ್ಡ್ ಆಗಿ ಮೂಗಿಂದ ನೀರು ಬರತ್ತೆ 🤣🤣🤣**ಶ್ರೀ**

Tuesday, May 19, 2026

ಧರ್ಮ ಮತ್ತು ಕರ್ಮ

 #ತರಲೆ## ಭಗವದ್ಗೀತೆ ಯಲ್ಲಿ ಅವತ್ತು ಕೃಷ್ಣ ಅರ್ಜುನನಿಗೆ ಹೇಳಿದ್ದ, ಇವತ್ತು ಕಂಪನಿಯವರು ಕೆಲಸದವರಿಗೆ ಹೇಳ್ತಾ ಇದ್ದಾರೆ "ನೀನು ನಿನ್ನ ಕೆಲಸ ಮಾಡು, ಪ್ರತಿಫಲದ ಬಗ್ಗೆ ಚಿಂತಿಸಬೇಡ " ಅಂತ. ಅವತ್ತಿದ್ದು ಧರ್ಮ, ಈಗದ್ದು ನಮ್ಮ ಕರ್ಮ ಅಷ್ಟೇ 🤣🤣**ಶ್ರೀ**


ತತ್ಕಾಲ್ ಟಿಕೆಟ್

 #ತರಲೆ## ಕಾದು ಕಾದು ತತ್ಕಾಲ್ ಟಿಕೆಟ್ ಕೂಡ ಸಿಗದಿದ್ದಾಗ, ಹೀಗೆ ಬೈಕೋಬೋದೇನೋ....ತತ್.... ಕಾಲ ನೇ ಸರಿ ಇಲ್ಲ ಅಂತ 🤣🤣**ಶ್ರೀ **